ಈಗ ಎಲ್ಲಿ ನೋಡಿದರು ಜಾತಿಯದ್ದೆ ಮಾತು.ಶ್ರೀಮಾನ್ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ಶುರು ಮಾಡಿಸಿದ್ದಾರೆ.
ನಾವು ಕನಾðಟಕದ ಪ್ರಬಲ ಜಾತಿ ಆಗಬೇಕೆಂದು ಎಲ್ಲಾ ಜಾತಿಗಳು ಪ್ರಯತ್ನಿಸುತ್ತಿವೆ. ವಿಶೇಷವಾಗಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಮೊದಲನೆ ಕೆಲಸ ಮಾಡಿದ್ದು ಸಾಲಮನ್ನಾ.. ಸಾಲಮನ್ನಾ ಸರಿಯೋ ತಪ್ಪೋ, ಆದರೆ ಸಾಲಮನ್ನಾ ಮಾಡುವುದರಲ್ಲು ಜಾತಿ ಪ್ರೀತಿ ಮತ್ತು ಜಾತಿ ದ್ವೇಷ ಕಾಣಿಸಿತ್ತು. ಬೇಕೆಂದೆ ಬಡ ಲಿಂಗಾಯಿತ ಮತ್ತು ರೈತ ಸಮುದಾಯವಾದ ಬಡ ಒಕ್ಕಲಿಗರನ್ನು ಕಡೆಗಣಿಸಿ ಆ ಮೂಲಕ ಜಾತಿ ದ್ವೇಷ ಪ್ರದಶಿðಸಿದ್ದರು. ಸಾವಿರಾರು ಕೋಟಿ ಸಾಲಮನ್ನಾ ಮಾಡಿದ್ದರು ಕೆಲವೇ ಕೋಟಿ ಮನ್ನಾ ಮಾಡದೇ ತಮ್ಮ ಮಾಜಿ ಗುರುಗಳ ಮೇಲಿನ ದ್ವೇಷವನ್ನು ಹೀಗೆ ತೀರಿಸಿಕೊಂಡರು.
ಮಕ್ಕಳ ಪ್ರವಾಸದ ವಿಷಯದಲ್ಲೂ ಜಾತಿ ತೂರಿಸಿ ಜಾತ್ಯಾತೀತ ವ್ಯಕ್ತಿಯಾದರು.
ಸಕಾðರದ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಜಾತಿಯವರನ್ನು ಕೂರಿಸಿ ಅಹಿಂದ ಮುಖ್ಯಮಂತ್ರಿಯೆನಿಸಿಕೊಂಡರು.
ಬೇರೆಯವರನ್ನು ಜಾತಿವಾದಿ ಎಂದು ಕರೆದು ತಾವು ಹಾಗೆ ಮಾಡಿದ್ದು ಅವರಿಗೆ ತಪ್ಪು ಏನಿಸಲ್ಲ, ಬೇರೆಯವರ ಬೆನ್ನು ಮಾತ್ರ ಕಾಣುತ್ತೆ, ಅವರ ಬೆನ್ನು ಅವರಿಗೆ ಕಾಣಲ್ಲ. ಇದೇ ವಾಸ್ತವ
ಜಾತಿ ಗಣತಿ:-
ಸುಮಾರು 80 ವಷðಗಳ ನಂತರ ಕೈಗೊಳ್ಳಲಾಗಿರುವ ಈ ಜಾತಿ ಗಣತಿಯು ಕೆಲವರಿಗೆ ಸಂತೋಷ, ಕೆಲವರಿಗೆ ಕಹಿ...!
ಇನ್ನೂ ಕೆಲವರಿಗೆ ಸಿದ್ದರಾಮಯ್ಯ ಗೋಲ್ ಮಾಲ್ ಮಾಡಿ ತಮ್ಮ ಜಾತಿ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಎಂಬ ಗುಮಾನಿ.
ಈ ಮಧ್ಯೆ ಉಪಪಂಗಡಗಳನ್ನು ಎತ್ತಿ ಕಟ್ಟಿ ಹೊಡೆದು ಆಳುವ ಹುನ್ನಾರ ನಡೆಯುತ್ತಿರುವುದು ದುರಂತ, ಈ ವಿಚಾರದಲ್ಲಿ ಅತಿ ಹೆಚ್ಚು ಹೊಡೆತ ಬೀಳುವುದು ಲಿಂಗಾಯಿತರಿಗಂತೆ.
ಲಿಂಗಾಯಿತ ಅನ್ನುವುದು ಧಮð ಮಾಡಲು ಅಥವಾ ವೀರಶೈವ ಧಮð ಮಾಡುವ ಪ್ರಯತ್ನ ನಡೆದಿದೆ. ಆದರೆ ವಾಸ್ತವದಲ್ಲಿ 12 ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದ ಎಲ್ಲಾ ಜಾತಿಗಳು ಲಿಂಗಾಯಿತ ಪಂಥದಲ್ಲಿ ಒಂದಾದವು. ಆದುದರಿಂದ ಲಿಂಗಾಯಿತರಲ್ಲಿ ಲಿಂಗಾಯಿತ ಪಂಚಮಸಾಲಿ, ಲಿಂಗಾಯಿತ ಸಾದರ, ಲಿಂಗಾಯಿತ ಕಮ್ಮಾರ,ಲಿಂಗಾಯಿತ ಸಿಂಪಿಗ,ಲಿಂಗಾಯಿತ ಬಣಜಿಗ, ಲಿಂಗಾಯಿತ ಕುಂಚಿಟಿಗ, ಲಿಂಗಾಯಿತ ರೆಡ್ಡಿ, ಲಿಂಗಾಯಿತ ಹಡಪದ, ಲಿಂಗಾಯಿತ ಕುಡುಒಕ್ಕಲಿಗ, ಲಿಂಗಾಯಿತ ಚಮ್ಮಾರ, ಲಿಂಗಾಯಿತ ಕುರುಬ, ಲಿಂಗಾಯಿತ ಗಾಣಿಗ, ಲಿಂಗಾಯಿತ ಹೆಳವ, ಲಿಂಗಾಯಿತ ನೊಣಬ ಹೀಗೆ ನೂರಾರು ಜಾತಿಗಳ ಒಕ್ಕೂಟ. ಈಗ ಕೆಲವರು ಬರೀ ಗಾಣಿಗ(ಯಡಿಯುರಪ್ಪ-ಲಿಂಗಾಯಿತ ಗಾಣಿಗ), ಬರೀ ಕುಂಚಿಟಿಗ(ಹೊಸದುಗð ಶಾಂತವೀರ ಸ್ವಾಮಿ-ಲಿಂಗಾಯಿತ ಕುಂಚಿಟಿಗ), ಬರೀ ಸಾದರ(ಮುಖ್ಯಮಂತ್ರಿ ಚಂದ್ರು-ಲಿಂಗಾಯಿತ ಸಾದರ), ಬರೀ ಬಣಜಿಗ, ಹಿಂದು ಬೇಡಜಂಗಮ ಎಂದು, ಬರೀ ಕುಡು ಒಕ್ಕಲಿಗ ಎಂದು ಬರೆಸಲು ಆಯಾ ಮಠಗಳು,ಸಂಘ-ಸಂಸ್ಥೆಗಳು ಕರೆ ಕೊಟ್ಟಿವೆ.. ಇದು ಒದಾಗುವ ಮತ್ತು ವಿಘಟನೆಗೊಳ್ಳುವ ಕಾಲ. ಎಚ್ಚೆತ್ತುಕೊಳ್ಳುವುದು ಅವರವರಿಗೆ ಬಿಟ್ಟಿದ್ದು.
ಒಕ್ಕಲಿಗರಲ್ಲು ಒಳಪಂಗಡಗಳಿವೆ ಆದರೆ ಬಹಿರಂಗವಾಗಿ ತೋರಿಸದೆ ರಾಜಕೀಯ ಲಾಭ ಪಡೆಯುವ ಕಲೆ ಅವರಿಗೆ ಸಿದ್ದಿಸಿದೆ. ಅವರಲ್ಲೂ ಮನಸ್ಥಾಪಗಳಿವೆ ಆದರೆ ಸಿದ್ದರಾಮಯ್ಯ ನಮ್ಮನ್ನು ತುಳಿಯುತ್ತಿದ್ದಾರೆ ಎಂಬ ಭಾವ ಅವರನ್ನು ಒಗ್ಗೂಡಿಸಿದೆ.
ಒಕ್ಕಲಿಗರು ಈ ದೇಶದ ಮೂಲ ರೈತ ಸಮುದಾಯದವರು, ಈ ದೇಶದಲ್ಲಿ 20 ಕೋಟಿಗೂ ಹೆಚ್ಚು ರೈತ ಸಮುದಾಯದವರಿದ್ದಾರೆ. ಉತ್ರಪ್ರದೇಶ, ಹರಿಯಾಣ, ಪಂಜಾಬ್ ನಲ್ಲಿ ಝಾಟ್ಸ್, ತಮಿಳುನಾಡಿನಲ್ಲಿ ಒಕ್ಕಲಿಗರ್, ಗೌಂಡರ್, ಕೇರಳದಲ್ಲಿ ನಾಯರ್, ಮಹಾರಾಷ್ಟ್ರದಲ್ಲಿ ಕೂಮಿð, ಗುಜರಾತ್ ನಲ್ಲಿ ಪಟೇಲ್ , ಹೀಗೆ ಸಾವಿರಾರು ರೈತ ಸಮುದಾಯಗಳಿವೆ ಅವುಗಳಲ್ಲಿ ಒಕ್ಕಲಿಗರು ಒಬ್ಬರು.
ಎಲ್ಲಾ ಜಾತಿಗು ಒಂದು ಕೋಡ್ ಕೊಟ್ಟಿದ್ದರೆ ಒಕ್ಕಲಿಗರಿಗೆ ಒಕ್ಕಲಿಗ ಎಂದು , ವಕ್ಕಲಿಗ ಎಂದು , ಗೌಡ ಒಕ್ಕಲಿಗ ಎಂದು ಹೀಗೆ ಹತ್ತಾರು ಕೋಡ್ ಗಳನ್ನು ಕೊಟ್ಟಿರುವುದರ ಹಿಂದೆ ಸಮುದಾಯ ಹೊಡೆಯುವ ಹುನ್ನಾರ ಇರುವುದು ಸ್ಪಷ್ಟ...ಅಧಿಕಾರಕ್ಕಾಗಿ ಇಂತಹ ಕೀಳು ಮನಸ್ಥಿತಿ ಎಲ್ಲೂ ನೋಡಿಲ್ಲ.....ಇಂತಹ ವಿಕೃತ ಮನಸ್ಥಿತಿ ಕ್ಷಣಿಕ, ಸಮಾಜ ಶಾಶ್ವತ...ಹೊಡೆಯುವ ಮನಸ್ಥಿತಿಯವರು ಏನನ್ನೂ ಸಾಧಿಸಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿ ಕುರುಬರಲ್ಲಿ ಆತ್ಮವೀಶ್ವಾಸ ಬಂದಿದೆ. ನಾವು ಹೆಚ್ಚಬಹುದೆಂದು ಅವರ ನಂಬಿಕೆ. ಸಿದ್ದರಾಮಯ್ಯನ ಪ್ರತಿ ನಡೆಗು ಅವರ ಬೆಂಬಲ.ಕುರುಬರಲ್ಲೂ ಒಳಪಳಗಡಗಳಿವೆ ಕಾಡು ಕುರುಬ, ಜೇನು ಕುರುಬ(ಚಾಮರಾಜನಗರ-ಕೊಳ್ಳೆಗಾಲದ ಆದಿವಾಸಿಗಳು), ಗೌಡ ಕುರುಬ(ಸಿದ್ದರಾಮಯ್ಯ-ಗೌಡ ಕುರುಬ) ಮಾಸಲು ಕುರುಬ, ಗೊಂಡ, ರಾಜಗೊಂಡ, ಸಾವಂತ ಕುರುಬ, ಮಲೆಯ ಕುರುಬ, ಹೀಗೆ......ನೂರಾರು ಕುಲಗಳಿವೆ... ಇದುವರೆಗು ಕಾಡು ಕುರುಬ, ಜೇನು ಕುರುಬರು, ಮಾಸಲು ಕುರುಬರು ಎಂದು ಶಾಸಕರಾಗಿಲ್ಲ ಎಂಬುದು ಗಮನಾಹð...ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವುದರಿಂದ ಇವೆಲ್ಲ ಗೌಣ....
ವತೂðರ್ ಪ್ರಕಾಶ್ ಬೆದರಿಕೆ ಪ್ರಕರಣದಲ್ಲು ಅವರಿಗೆ ಬೆಂಬಲವಾಗಿ ಸಿದ್ದರಾಮಯ್ಯ ನಿಂತಿದ್ದಾರೆ ಎಂಬ ಗುಸುಗುಸು.
ದಲಿತರಲ್ಲು ನೂರಾಜು ಜಾತಿಗಳಿವೆ,ಎಡ-ಬಲ ಜಾತಿಗಳಿವೆ, ಈಗ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಒಂದಾಗುತ್ತಿದ್ದಾರೆ, ಪರಮೇಶ್ವರ್ ಅವರಿಗು ಆಸೆಯಿದೆ(ಹೇಳಿಕೊಂಡಿದ್ದಾರೆ), ಎಡ-ಬಲ ಬಿಟ್ಟು ಒಂದಾದರೆ ದಲಿತರು ಮುಖ್ಯಮಂತ್ರಿ ಆಗಬಹುದು. ಒಳ ಮೀಸಲಾತಿ ಹೋರಾಟ ಜಾರಿಯಲ್ಲಿದೆ. ನಾಯಕ ಜನಾಂಗಕ್ಕೆ ವಾಲ್ಮೀಕಿ ಜನಾಂಗವೆಂದು ಕರೆಯುತ್ತಾರೆ, ಅವರನ್ನು ತುಳಿಯಲು ಪರಿಶಿಷ್ಟ ಪಂಗಡಕ್ಕೆ ಗೊಲ್ಲರನ್ನು ಸೇರಿಸಿದ್ದಾರಂತೆ. ಅಲ್ಲದೇ ನಾಯಕ ಜನಾಂಗಕ್ಕೆ ಕೊಟ್ಟಿದ್ದ ಕೋಡ್ ಕಾಡು ಕುರುಬರಿಗೆ ಕೊಟ್ಟಿದ್ದಾರಂತೆ...ಏನಿದರ ಮಮð
...?
ಮುಸ್ಲಿಂ ಬಾಂಧವರಿಗೆ ಬಿ.ಜೆ.ಪಿ ಅಧಿಕಾರದಲ್ಲಿ ಇಲ್ಲದೆ ಇರುವುದೇ ಸಂತಸ. ಅವರಲ್ಲೂ ನೂರಾರು ಜಾತಿಗಳನ್ನು ಮಾಡಿದ್ದರು ಅವರಿಗೆ ಭಯವಿಲ್ಲ ಏಕೆಂದರೆ ಧಮðದ ಕಾಲಂನಲ್ಲಿ ಎಲ್ಲರು ಮುಸ್ಲಿಂ ಎಂದು ಬರೆಸುತ್ತಾರೆ.
ಕ್ರಿಶ್ಚಿಯನ್ ವಿಷಯದಲ್ಲಿ ಸಕಾðರ ವಿಚಿತ್ರವಾಗಿ ನಡೆದುಕೊಳ್ಳುತ್ತಿದೆ. ಕ್ರಿಶ್ಚಿಯನ್ ಧಮðದಲ್ಲಿ ಬರೀ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಪಂಗಡಗಳಿದ್ದೊ, ಆದರೆ ಈಗ ನೂರಾರು ಜಾತಿಗಳನ್ನು ಸೃಷ್ಟಿಸಿದೆ..ಕ್ರಿಶ್ಚಿಯನ್ ಮಾದಿಗ, ಕ್ರಿಶ್ಚಿಯನ್ ಹೊಲೆಯ, ಕ್ರಿಶ್ಚಿಯನ್ ಭೋವಿ, ಕ್ರಿಶ್ಚಿಯನ್ ಈಡಿಗ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯಿತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಕಮ್ಮಾರ, ಕ್ರಿಶ್ಚಿಯನ್ ಮಡಿವಾಳ, ಕ್ರಿಶ್ಚಿಯನ್ ವಿಶ್ವಕಮð......
ಅಬ್ಬಾ.. ಇಷ್ಟೊಂದು ಜಾತಿಗಳನ್ನು ಅಲ್ಲು ಸೃಷ್ಟಿಸಿ, ಅದು ಏನು ಮಾಡುತ್ತಾರೊ ಆ ದೇವರೆ ಬಲ್ಲ.
ಕ್ರಿಶ್ಚಿಯನ್ ಧಮðದಲ್ಲಿ ಇಷ್ಟೊದು ಜಾತಿ ಸೃಷ್ಟಿಸಿ ಅದು ಏಕೊ ಬೌದ್ಧ ಧಮð
ಕ್ಕೆ ಮತಾಂತರಗೊಂಡವರ ಜಾತಿ ಪತ್ತೆ ಮಾಡದೇ ಸುಮ್ಮನಾಗಿದ್ದು ಏಕೆ...ಏಕೆ ಪಕ್ಷಪಾತ..? ಉತ್ತರ ಇಲ್ಲ...
ಬಜೆಟ್ ವಿಷಯಕ್ಕೆ ಬಂದರೆ ಅಭಿವೃದ್ಧಿಗಿಂತ ಹೆಚ್ಚು ಸಿ.ಎಂ ತಮ್ಮ ಖುಚಿð ಉಳಿಸಿಕೊಳ್ಳಲು ಪಟ್ಟ ಪಾಡು ಎಂಬಂತೆ ಕಾಣಿಸಿತು. ಬಜೆಟ್ ಅಲ್ಲಿ ಕುರಿ ಸತ್ತರೆ 5 ಸಾವಿರ ,ಹಸು ಸತ್ತರೆ......? ಏಕೆ ಈ ತಾರತಮ್ಯ...?
ಕೆಂಪೇಗೌಡ ಸಂಶೋಧನಾ ಸಂಸ್ಥಗೆ ಹಣ ಕೊಡಲಿಲ್ಲ..
ಬಿ.ಜಿ.ಎಸ್ ಸ್ಮಾರಕ ನಿಮಿðಸಲಿಲ್ಲ...
ಬಡ ಲಿಂಗಾಯಿತ/ಬಡ/ಮಧ್ಯಮ ಒಕ್ಕಲಿಗರ ಬೇಡಿಕ ಈಡೇರಿಸಲಿಲ್ಲ(ಒಕ್ಕಲಿಗರ ಕುಲಕಸುಬು ಪ್ರೋತ್ಸಾಹಿಸಲು ಒಕ್ಕಲಿಗ ಅಭಿವೃದ್ಧಿ ನಿಗಮ ತೆರೆಯಲಿಲ್ಲ)
ಒಳ ಮೀಸಲಾತಿ ಜಾರಿ ಬಗ್ಗೆ ಚಕಾರವೆತ್ತಿಲ್ಲ...
ಮಡಿವಾಳ, ಕ್ಷೌರಿಕ, ವಿಶ್ವಕಮð, ಕೊರಚ, ಕೊರಮ, ಹಂದಿಜೋಗಿ, ಗೊಲ್ಲ,ಕಾಡುಗೊಲ್ಲ, ಯಾದವ , ಕಾಡು ಕುರುಬ, ಜೇನು ಕುರುಬ,.... ಇತರೆ ಜಾತಿಗಳಿಂದ ಯಾವುದೇ ಶಾಸಕರನ್ನು ಗೆಲ್ಲಿಸದೆ ಇರುವುದು ಯಾವ ಅಹಿಂದ
ಬೆಂಗಳೂರು ವಿಭಜಿಸಿ ಕೆಂಪೇಗೌಡರ ಇತಿಹಾಸ ಅಳಿಸುವುದು ಅತಿ ಭಯಾನಕ ದ್ವೇಷ ರಾಜಕಾರಣ,
ಒಟ್ಟಿನಲ್ಲಿ ಯಾರ ಮಾತಿಗೂ ಬೆಲೆ ಕೊಡದೆ,ದಪðದಿಂದ , ಸವಾðಧಿಕಾರಿ ವತðನೆಯಿಂದ ಅಧಿಕಾರ ನಡೆಸುವವರು ಎಷ್ಟು ದಿನ ನಡೆಸಬಹುದು, ಒಂದಲ್ಲಾ ಒಂದು ದಿನ ಕೆಳಗಿಳಿಯಲೆ ಬೇಕು ಎಕೆಂದರೆ ಅದೇ ವಾಸ್ತವ......